Back To Top

ಮೂಕವಾಗಲಿ ಮಾತು ಭರ್ತಿಯಾಗಲಿ ಕಂಬನಿ | ಅಯ್ಯಪ್ಪ ನಾಯಕ

ಮೂಕವಾಗಲಿ ಮಾತು ಭರ್ತಿಯಾಗಲಿ ಕಂಬನಿ | ಅಯ್ಯಪ್ಪ ನಾಯಕ

ಮರುಳಿ ನೀನು ಕರಳಿಗಿಂತೇಚ್ಚಿನ ಪ್ರೀತಿ ಸುಟ್ಟಿಯೇನು? ಧಾರಳವೇನಲ್ಲ ಎದೆಯಲಿ ಹುಟ್ಟಿ ಕರಾಳ ನೆನಪುಗಳ ಸ್ಮರಣಿಸುವುದೆಂದರೆ… ಸರಳ ಮಾತಿದು ಸುರಿಸಿ ಬಿಡು ಕಂಬನಿ ಅಗಲಲಿ ನೆನಪುಗಳೆಲ್ಲವೂ…. ಸ್ಥಬ್ದವಾಗಲಿ ಗಿಜುಗುಡುವ ನೆನಪುಗಳ ಹೃದಯಗಂಬನಿ.. ಮೂಕವಾಗಲಿ ಮಾತು ಹೇಳಿದಷ್ಟು ಕೇಳುವವರ್ಯಾರಿಲ್ಲ ನಿನ್ನಷ್ಟು? ಬಾಕಿಯುಳಿಯದೆ ಏನು ಭರ್ತಿಯಾಗಲಿ ಕಂಬನಿ. ಅಯ್ಯಪ್ಪ ನಾಯಕ ಅನಿಕೇತನ ಪದವಿ ಮಹಾವಿದ್ಯಾಲಯ, ಸಿಂಧನೂರು
  • 337
  • 0
  • 0
ಮಾನವೀಯತೆ ಮೊಳಕೆಯೊಡೆಯಲಿ | ನಾಗರಾಜ ಕುಟುಮರಿ

ಮಾನವೀಯತೆ ಮೊಳಕೆಯೊಡೆಯಲಿ | ನಾಗರಾಜ ಕುಟುಮರಿ

ಅನ್ನಿಸುವುದು ಕೆಲವೊಮ್ಮೆ ಕಲ್ಲಗೋಡೆಯಾಗಬೇಕಿತ್ತು ಪಶುಪಕ್ಷಿಯಾಗಬೇಕಿತ್ತು ಗಿಡಮರಗಳಾಗಬೇಕಿತ್ತು ಸಾಕಾಗಿದೆ ಮಾನವ ಜನ್ಮ, ನೆಮ್ಮದಿಯಿಲ್ಲ ನಾಡಿನಲಿ ಒಡನಾಡಿಗಳಲಿ ದ್ವೇಷ, ಅಸೂಯೆ ಹೆಚ್ಚಾಗಿದೆ ಮಾನವನಲಿ ಪ್ರೀತಿಯು ಗೈರಾಗಿಬಿಟ್ಟಿದೆ ಮಮತೆ-ವಾತ್ಸಲ್ಯ ಮರೆತುಹೋಗಿದೆ ಸ್ನೇಹವು ಅಡಗಿಕೊಂಡು ಬಿಟ್ಟಿದೆ ಸ್ವಾರ್ಥವು ಪರಮಾರ್ಥವಾಗಿಬಿಟ್ಟಿದೆ ಬೀಳುವುದು ಅದೊಮ್ಮೆ ಬರಗಾಲ ಸ್ನೇಹ-ಪ್ರೀತಿಯದು ಮಮತೆ-ವಾತ್ಸಲ್ಯದ್ದು ಆಗ ನರನೆದೆಯಲಿ ಮಾನವವೀಯತೆ ಮೊಳಕೆಯೊಡೆದು ಹಸಿರಾಗುವುದು ನಾಗರಾಜ ಕುಟುಮರಿ ಕರ್ನಾಟಕ ಕಲಾ ಮಹಾವಿದ್ಯಾಲಯ, ಧಾರವಾಡ
  • 304
  • 0
  • 0
ರಾಧಾ ಕೃಷ್ಣರ ಪ್ರೇಮ ಸಲ್ಲಾಪ | ಧನುಷ್ ರೆಡ್ಡಿ

ರಾಧಾ ಕೃಷ್ಣರ ಪ್ರೇಮ ಸಲ್ಲಾಪ | ಧನುಷ್ ರೆಡ್ಡಿ

ಮೇಘಶ್ಯಾಮನ ಎದೆಗೆ ರಾಧೆ ಒರಗಿಹಳು ಎದೆಯ ಬಡಿತವ ಕೇಳುತಾ ಕೆಂಪಗೆ ನಾಚಿಹಳು ನಾಚುತ್ತಾ ಕನಸಿಗೆ ಜಾರಿದಳು| ರಾಧೆಯ ಬಿಸಿಯುಸಿರು ಎದೆಗೆ ಸೋಂಕಿರಲು ಕೃಷ್ಣನ ಮೈಮನವು ಭಾವ ಸರಿತೆಯಲಿ ಮಿಂದಿರಲು ತುಟಿಗಳು ಮುತ್ತಿನ ಆಸೆ ಬಯಸಿದವು| ಅವಳ‌ ಹಣೆಗೆ ತುಟಿಯನ್ನೊತ್ತಿ ಮುತ್ತಿಟ್ಟನು ಪ್ರೇಮಸುಧೆಯ ರಾಧೆಯ ಮನಸ್ಸಿಗೆ ಹರಿಬಿಟ್ಟನು ಅನುರಾಗದ ಅಲೆಗೆ ನೂಕಿದನು| ರಾಧೆಯು ನಾಚಿ ಹೆಗಲ ತೊರೆದು
  • 330
  • 0
  • 0
ಕುಪ್ಪಳ್ಳಿ ಪ್ರವಾಸದ ಮರೆಯಲಾಗದ ನೆನಕೆಗಳು| ಮಾನಸ ಜಿ

ಕುಪ್ಪಳ್ಳಿ ಪ್ರವಾಸದ ಮರೆಯಲಾಗದ ನೆನಕೆಗಳು| ಮಾನಸ ಜಿ

ಎಲ್ಲಿಯೂ ನಿಲ್ಲದಿರು.. ಮನೆಯನೊಂದು ಕಟ್ಟದಿರು..ಕೊನೆಯನೆಂದೂ ಮುಟ್ಟದಿರು.. ಓ ಅನಂತವಾಗಿರು! ಓ ನನ್ನ ಚೇತನ, ಆಗು ನೀ ಅನಿಕೇತನ! – ಕುವೆಂಪು ಕುಪ್ಪಳ್ಳಿ ಎಂದಾಕ್ಷಣ ನಮ್ಮ ಮನಸ್ಸಿಗೆ ಮೊದಲು ಬರುವುದು ನಮ್ಮ ರಾಷ್ಟ್ರಕವಿ ಕುವೆಂಪುರವರ ಸವಿನೆನಪು. ಸಾಹಿತ್ಯ ಪ್ರೇಮಿಗಳಿಗೆ ಈ ಸ್ಥಳ ಕೈಲಾಸ ಎಂದರೆ ತಪ್ಪಾಗಲಾರದು. ಅಂತಹ ಸ್ವರ್ಗದಂತಿರುವ ಕುಪ್ಪಳಿಗೆ ನಮ್ಮ ಕಾಲೇಜಿನ ಕನ್ನಡ ವಿಭಾಗದ ದ್ವಿತೀಯ
  • 437
  • 0
  • 0
ಹಸಿವೆಂಬ ಬೇತಾಳ ಬೆನ್ನತ್ತಿದಾಗ ಪೊರೆಯೊಡೆವ ಕನಸಿನ ಚೀಲ | ಶಿಲ್ಪ ಬಿ

ಹಸಿವೆಂಬ ಬೇತಾಳ ಬೆನ್ನತ್ತಿದಾಗ ಪೊರೆಯೊಡೆವ ಕನಸಿನ ಚೀಲ | ಶಿಲ್ಪ ಬಿ

ಎಂದೋ ರಚಿಸಿದ ಬಣ್ಣ ಬಣ್ಣದ ಕನಸುಗಳ ಚೀಲ ಯಾರೋ ತುಂಬಿದ ಹಸಿ ಬಿಸಿ ಉಸಿರಿನ ಭಾವ.. ಆ ಕನಸುಗಳಿಗೆ ಕನಸಾಗಿ ತಂದೆಯಂತೆ ಹೊರುವ ಹೆಗಲಿಗು ತಿಳಿದಿಲ್ಲ ಅದು ತನ್ನದಲ್ಲವೆಂಬ ಸತ್ಯ ಆ ಉಸಿರಿಗೆ ಉಸಿರಾಗಿ ತಾಯಿಯಂತೆ ಪೊರೆಯುವ ಮೆದು ಸ್ಪರ್ಶಕೂ ತಿಳಿದಿಲ್ಲ ಅದು ತನ್ನದಲ್ಲವೆಂಬ ವಾಸ್ತವ.. ಆದರೆ ಹಸಿವೆಂಬ ಬೇತಾಳ ಒಮ್ಮೆ ಬೆನ್ನಟ್ಟಿದಾಗ ಎಲ್ಲವು ವಿಧಿ
  • 519
  • 0
  • 0
ಮರಳಬೇಕು ಅಲ್ಲಿಯೇ ಮಾಗಬೇಕು ಎನ್ನುವ ಮರಳಿ ಮಣ್ಣಿಗೆ | ದಿವ್ಯಶ್ರೀ ಹೆಗಡೆ

ಮರಳಬೇಕು ಅಲ್ಲಿಯೇ ಮಾಗಬೇಕು ಎನ್ನುವ ಮರಳಿ ಮಣ್ಣಿಗೆ | ದಿವ್ಯಶ್ರೀ ಹೆಗಡೆ

ಮರಳಲೇ ಬೇಕು ಎಷ್ಟೇ ಎತ್ತರಕ್ಕೆ ಹಾರಿದರೂ ಮತ್ತೆ ಗೂಡಿಗೆ. ಮನುಷ್ಯ ಎಷ್ಟೇ ಸಾಧಿಸಿರಲಿ ಯಾವುದೇ ಊರಿಗೆ ಹೋಗಲಿ ಅಥವಾ ವಿದೇಶದಲ್ಲಿಯೇ ಕೆಲಸವಾಗಿ ಕೈ ತುಂಬಾ ಸಂಬಳ ಸಿಕ್ಕರೂ ತನ್ನೂರಿನ ಮಣ್ಣಿನ ಘಮದ ವಾಸನೆ ಅದರ ಆನಂದ ಬೇರೆ ಎಲ್ಲಿಯೂ ಇಲ್ಲ. ಆ ನೆಮ್ಮದಿ ಪರ ಊರಿನಲ್ಲಿಲ್ಲಾ ಕೊನೆಗೂ ನಾವು ಮರಳಿ ನಮ್ಮ ಊರಿನ ಮಣ್ಣನ್ನೇ ಪ್ರೀತಿ
  • 687
  • 0
  • 0