Back To Top

ಪ್ರೇಮ ಸೌಂದರ್ಯ | ಸೌಮ್ಯ ನೇತ್ರೇಕರ್‌

ಪ್ರೇಮ ಸೌಂದರ್ಯ | ಸೌಮ್ಯ ನೇತ್ರೇಕರ್‌

ಪ್ರೇಮ ಪದಗಳಿಲ್ಲದ ಬಂಧ ಸುಂದರ ಕಾವ್ಯಾತ್ಮಕ ಅನುಬಂಧ ಆನಂದ ಮನದಿ ತುಂಬಿ ಪ್ರೀತಿಯ ರಸದೌತಣ ಬಡಿಸಿ ಆವರಿಸಿದೆ ಜಗವ ಮರೆಸಿ ಆ ಪ್ರೇಮ ಜಗದಿ ಸಕಲ ಅಂದದಿ ಮನಿಸಿ ಅದಮ್ಯ ಅನಂತದಿ ಪರವಶವೀ ಮನ ಹಸಿರಿಗೆ ಹೊಸ ಚಿಗುರಿಗೆ, ಉಲ್ಲಾಸ ನೀಡಿದ ಮೇಘ ವರುಣಕೆ ಚೆಂಬೆಳಕಿನಲಿ ಚಿಲಿಪಿಲಿ ಇಂಚರ ಗಾನಲಹರಿಗೆ ಸೋತಿದೆ ಚರಾಚರ ಮೊಳೆಯೊಡೆವ ಮೊಗ್ಗು
  • 272
  • 0
  • 0
ವಜ್ರದ ಉಂಗುರದ ಪವಾಡ | ಸಿಂಚನ ಜೈನ್. ಮುಟ್ಟದ ಬಸದಿ

ವಜ್ರದ ಉಂಗುರದ ಪವಾಡ | ಸಿಂಚನ ಜೈನ್. ಮುಟ್ಟದ ಬಸದಿ

ಒಂದು ಊರಿನಲ್ಲಿ ಒಬ್ಬ ಶ್ರೀಮಂತ ಇದ್ದ, ನೂರಾರು ಎಕರೆ ಹೊಲ, ಗದ್ದೆ, ತೋಟ, ಐದಾರು ಕಾರ್ಖಾನೆ ಹೀಗೆ ಹರಡಿತ್ತು ಅವನ ಸಾಮ್ರಾಜ್ಯ. ಬಡತನದಿಂದ ಪರಿಶ್ರಮವಹಿಸಿ ಜೀವನದಲ್ಲಿ ಈ ಸ್ಥಿತಿ ತಲುಪಿದವ. ಬೆವರಿನ ಬೆಲೆ ಚೆನ್ನಾಗಿ ಬಲ್ಲವ. ಖುದ್ದು ತನ್ನ ವಾಹನದಲ್ಲಿ ತೆರಳಿ ಎಲ್ಲವನ್ನು ಉಸ್ತುವಾರಿ ನೋಡಿಕೊಳ್ಳುವವ, ವರಮಾನ ಚೆನ್ನಾಗಿಯೇ ಇತ್ತು. ಆ ವ್ಯಕ್ತಿಗೆ ಒಬ್ಬನೇ ಮಗ.
  • 335
  • 0
  • 0
ಹಣೆಬರಹ ತಿಳಿದವರ್ಯಾರು! | ಸುಶ್ಮಿತಾ ಹೆಗ್ಡೆ

ಹಣೆಬರಹ ತಿಳಿದವರ್ಯಾರು! | ಸುಶ್ಮಿತಾ ಹೆಗ್ಡೆ

ಸೋಮನಹಳ್ಳಿ ಎಂಬ ಒಂದು ಚಿಕ್ಕ ಊರು. ಆ ಊರಿನ ಜನರು ಪರಸ್ಪರ ಹೊಂದಿಕೊಂಡು ಜೀವನ ನಡೆಸುತ್ತಿದ್ದರು. ಊರಿನ ಜನರ ನಡುವೆ ಎಷ್ಟು ಪ್ರೀತಿ, ವಿಶ್ವಾಸ ಎಂದರೆ ಏನೇ ಕಷ್ಟಗಳು ಎದುರಾದರೂ ಜೊತೆಗೆ ನಿಂತು ಪರಿಹರಿಸುತ್ತಿದ್ದರು. ದಿನಪೂರ್ತಿ ಎಷ್ಟೇ ಕೆಲಸದಲ್ಲಿ ತೊಡಗಿದ್ದರೂ ಸಹ ಸಂಜೆಯಾಗುತ್ತಿದ್ದಂತೆ ಒಂದು ಛತ್ರದಡಿ ಸೇರುತ್ತಿದ್ದರು. ದೇವರಿಗೆ ಭಜನೆಯ ರೂಪದಲ್ಲಿ ವಂದನೆಯನ್ನು ಸಲ್ಲಿಸಿ ಎಲ್ಲರೂ
  • 291
  • 0
  • 0
ಚೋಮನ ದುಡಿಯ ಪುನರಾವಲೋಕನ | ಅನುಜ್. ವಿ. ತಿಕೋಟಿಕರ್

ಚೋಮನ ದುಡಿಯ ಪುನರಾವಲೋಕನ | ಅನುಜ್. ವಿ. ತಿಕೋಟಿಕರ್

1933ರಲ್ಲಿ ಶಿವರಾಮ ಕಾರಂತರು ಬರೆದ ‘ಚೋಮನ ದುಡಿ’ ಎನ್ನುವ ವಾಸ್ತವವಾದಿ ಕಾದಂಬರಿಯು ಆಗಿನ ಕಾಲದ ಒಂದು ಜಾತಿಯು ಮತ್ತೊಂದು ಜಾತಿಯನ್ನು ನಡೆಸಿಕೊಳ್ಳುತ್ತಿದ್ದ ಬಗೆಯನ್ನೂ, ಹಕ್ಕು ಹಾಗೂ ಕರ್ತವ್ಯ ಪ್ರಜ್ಞೆಯನ್ನೂ, ಸಾಮಾಜಿಕ ಮತ್ತು ಆರ್ಥಿಕ ನ್ಯಾಯದ ಕುರಿತಾದ ಹಲವು ವಿಶಂಕೆಗಳನ್ನೂ, ಮತ-ಮತಗಳ ನಡುವಣ ಸಂಘರ್ಷವನ್ನೂ, ಪ್ರಮುಖವಾಗಿ ಬ್ರಿಟೀಷ್ ವಸಹಾತುಶಾಹಿ ಆಳ್ವಿಕೆಯು ಭಾರತದಲ್ಲಿನ ಜಾತಿ ವ್ಯವಸ್ಥೆ ಮೇಲೆ ಹೇಗೆಲ್ಲ
  • 919
  • 0
  • 4
Superhero ಅಪ್ಪ | ಲಿಖಿತಾ. ಎಂ

Superhero ಅಪ್ಪ | ಲಿಖಿತಾ. ಎಂ

ಆಕೆಯ ಬಿಸಿ ಉಸಿರು ತಂಗಾಳಿಯಲ್ಲಿ ಬೆರೆತಾಗ ಅವಳು ತಾಯಿಯ ಮಡಿಲು ಸೇರಿದಾಗ, ತಾಯಿಯ ಮನ ಮಿಡಿಯಿತು ತನ್ನ ಕಂದನಿಗಾಗಿ ತನ್ನ ಯುವರಾಣಿಯನ್ನು ಕಾಣಲು ರಾಜ ಏಳು ಸಮುದ್ರ ದಾಟಿ ಬಂದಂತಿತ್ತು, ಮೊದಲ ಬಾರಿಗೆ ಆಕೆಯನ್ನು ಎತ್ತಿ ಹಿಡಿದಿದಾಗ.. ಅವನ ನೋವೆಲ್ಲಾ ಮರೆತು ಹೋಯಿತು, ಜೀವನ ಬದಲಾಯಿತು, ಪ್ರಪಂಚದ ಎಲ್ಲಾ ಖುಷಿಯನ್ನು ತನ್ನ ಮಗಳಿಗೆ ನೀಡುವ ಆಸೆ
  • 383
  • 0
  • 1
ಮನುಷ್ಯತ್ವದ ಪ್ರಜ್ಞೆಯನ್ನು ಭಾವನಾತ್ಮಕವಾಗಿ ಚಿತ್ರಿಸಿದ ಸಿನಿಮಾ ‘ಫೋಟೋ’ | ಸೌಮ್ಯ ನೇತ್ರೇಕರ್‌

ಮನುಷ್ಯತ್ವದ ಪ್ರಜ್ಞೆಯನ್ನು ಭಾವನಾತ್ಮಕವಾಗಿ ಚಿತ್ರಿಸಿದ ಸಿನಿಮಾ ‘ಫೋಟೋ’ | ಸೌಮ್ಯ ನೇತ್ರೇಕರ್‌

ಫೋಟೋ ಮನುಷ್ಯತ್ವದ ಪ್ರಜ್ಞೆಯನ್ನು ಸುಪ್ತವಾಗಿಡದೇ ಅದನ್ನು ಭಾವನಾತ್ಮಕವಾಗಿ ಹೊರಹೊಮ್ಮಿಸುವ ಚಲನಚಿತ್ರ. ಮನೋರಂಜನೆಯ ಉನ್ಮಾದದಲ್ಲಿರುವ ನಮ್ಮ ಸಂವೇದನೆಗಳಿಗೆ ಭಾರತದ ಭೀಕರ ವಾಸ್ತವವನ್ನು ನೈಜವಾಗಿ ತೋರಿಸುವ ಮೂಲಕ ನಮ್ಮಲ್ಲಿ ಜವಾಬ್ದಾರಿ ಮೂಡಿಸುತ್ತದೆ. ನಮ್ಮ ದೇಶದಲ್ಲಿ ಬಡವರು ಆಳುವ ವರ್ಗದ ದಬ್ಬಾಳಿಕೆಯಲ್ಲಿ ನಲುಗುವ ಸ್ಥಿತಿ ಮೂಕವಿಸ್ಮಿತರನ್ನಾಗಿಸುತ್ತದೆ. ದುರ್ಗ್ಯಾನ ವಿಧಾನಸೌಧದ ಮುಂಭಾಗದಲ್ಲಿ ಒಂದು ಫೋಟೋ ತೆಗೆಸಿಕೊಳ್ಳುವ ಆಸೆಯನ್ನು ಇಲ್ಲಿ ಸಂಕೇತಿಸಲಾಗಿದೆ. ತಂದೆ
  • 290
  • 0
  • 0