Back To Top

 ಮಾನವೀಯತೆ ಮೊಳಕೆಯೊಡೆಯಲಿ | ನಾಗರಾಜ ಕುಟುಮರಿ

ಮಾನವೀಯತೆ ಮೊಳಕೆಯೊಡೆಯಲಿ | ನಾಗರಾಜ ಕುಟುಮರಿ

ಅನ್ನಿಸುವುದು ಕೆಲವೊಮ್ಮೆ
ಕಲ್ಲಗೋಡೆಯಾಗಬೇಕಿತ್ತು
ಪಶುಪಕ್ಷಿಯಾಗಬೇಕಿತ್ತು
ಗಿಡಮರಗಳಾಗಬೇಕಿತ್ತು
ಸಾಕಾಗಿದೆ ಮಾನವ ಜನ್ಮ,
ನೆಮ್ಮದಿಯಿಲ್ಲ ನಾಡಿನಲಿ
ಒಡನಾಡಿಗಳಲಿ

ದ್ವೇಷ, ಅಸೂಯೆ
ಹೆಚ್ಚಾಗಿದೆ ಮಾನವನಲಿ
ಪ್ರೀತಿಯು ಗೈರಾಗಿಬಿಟ್ಟಿದೆ
ಮಮತೆ-ವಾತ್ಸಲ್ಯ ಮರೆತುಹೋಗಿದೆ
ಸ್ನೇಹವು ಅಡಗಿಕೊಂಡು ಬಿಟ್ಟಿದೆ
ಸ್ವಾರ್ಥವು ಪರಮಾರ್ಥವಾಗಿಬಿಟ್ಟಿದೆ

ಬೀಳುವುದು ಅದೊಮ್ಮೆ ಬರಗಾಲ
ಸ್ನೇಹ-ಪ್ರೀತಿಯದು ಮಮತೆ-ವಾತ್ಸಲ್ಯದ್ದು
ಆಗ ನರನೆದೆಯಲಿ ಮಾನವವೀಯತೆ
ಮೊಳಕೆಯೊಡೆದು ಹಸಿರಾಗುವುದು

ನಾಗರಾಜ ಕುಟುಮರಿ
ಕರ್ನಾಟಕ ಕಲಾ ಮಹಾವಿದ್ಯಾಲಯ, ಧಾರವಾಡ

Prev Post

ರಾಧಾ ಕೃಷ್ಣರ ಪ್ರೇಮ ಸಲ್ಲಾಪ | ಧನುಷ್ ರೆಡ್ಡಿ

Next Post

ಮೂಕವಾಗಲಿ ಮಾತು ಭರ್ತಿಯಾಗಲಿ ಕಂಬನಿ | ಅಯ್ಯಪ್ಪ ನಾಯಕ

post-bars

Leave a Comment

Related post