Back To Top

 ಅಪ್ಪು ಅಜರಾಮರ | ಹಣಮಂತ ಎಂ ಕೆ

ನಿನ್ನ ಕುರಿತು ಬರೆಯಲು ಪುಟಗಳು ಸಾಲಲ್ಲ,
ನಿನ್ನೆಡೆಗಿನ ಭಾವದ ಹರಿವ ಬಿಂಬಿಸಲು ಪದಗಳು ತೋಚಿಲ್ಲ…

ಪರಮಾತ್ಮನಿಗೂ ಪ್ರಿಯನಾದ ಪುಣ್ಯಾತ್ಮ ನೀನು,
ನೀನಿಲ್ಲವೆಂಬ ಕಟುಸತ್ಯ ಅರಗಿಸಿಕೊಳ್ಳಲು ಈ ಜನುಮವೇ ಸಾಲದಿನ್ನೂ…

ಪಾರ್ವತಮ್ಮನ ಮುದ್ದಿನ ಲೋಹಿತ್, ಮುಂದೆ ಕರುನಾಡ ಮನೆಮಗನಾದ ನಮ್ಮ ಪುನೀತ್…

ಮುತ್ತುರಾಜನ ಅಪರೂಪದ ಮುತ್ತು ನೀನು…
ಕನ್ನಡಿಗರ ಹೃದಯಾಭಿಮಾನದ ಶಾಶ್ವತ ಸೊತ್ತು ನೀನು…

ಅಭಿಮಾನಿಗಳ ಅಭಿಮಾನದ ಅರಸು ನಮ್ಮ ಅಪ್ಪು,
ನಮ್ಮಿಂದವರ ಅಗಲಿಸಿದ್ದೇ ಆ ದೈವದ ದೊಡ್ಡ ತಪ್ಪು…

ಎಲ್ಲೂ ಸಿಗದ ಬೆಟ್ಟದ ಹೂವೂ ನೀನು,
ಸಾವಿನಲ್ಲೂ ಸಾರ್ಥಕತೆ ತೋರಿ ಸಾಗಿದೇಯೇನು..?

ನಿಷ್ಕಲ್ಮಶ ಹೃದಯಿ, ನಗುಮುಗದೊಡೆಯ ಪುನೀತ,
ನಿಜಕ್ಕೂ ನಿಮ್ಮನೂ ಪಡೆದ ಕರುನಾಡೇ ಪುನೀತಾ….

ಜೊತೆಗಿರದ ಜೀವ ಎಂದೆಂದಿಗೂ ಜೀವಂತ,
ಕನ್ನಡಿಗರ ಹೃದಯದಲ್ಲಿ ಸದಾ ನೀ ನಗುವಿನ ಶ್ರೀಮಂತ…

ಹಣಮಂತ ಎಂ.ಕೆ
ಶ್ರೀ ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರ, ತುಮಕೂರು

Prev Post

ಅಕ್ಷರ ಮಾಂತ್ರಿಕನ ಹಂತಕಿ ನನ್ನನ್ನು ಬರೆಸಿದಳು | ರಂಜಿತ ಹೆಚ್. ಕೆ

Next Post

ಈ ಐತಿಹಾಸಿಕ ದೇವಾಲಯ ಎಲ್ಲಿಯದ್ದು ಎಂದು ಹೇಳ ಬಲ್ಲಿರೇ..! | ಭಾರತಿ ಹೆಚ್‌.…

post-bars

Leave a Comment

Related post