About the Author

ಆಶ್ರಿತಾ ಕಿರಣ್ ಅವರು ಉಡುಪಿ ಜಿಲ್ಲೆಯ ಸಿದ್ದಾಪುರದವರು. ತಂದೆ ಟಿ ಗುರುಮೂರ್ತಿ ರಾವ್ ಮತ್ತು ತಾಯಿ ಗೀತಾ. ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಕುಂದಾಪುರದಲ್ಲಿ ಮುಗಿಸಿ ಡಿಗ್ರಿ ಪದವಿಯನ್ನು ಕಾರ್ಕಳ ಕಾಲೇಜಿನಲ್ಲಿ ಪಡೆದರು. ಮಂಗಳೂರು ವಿಶ್ವವಿದ್ಯಾನಿಲಯದಿಂದ ಇಂಗ್ಲಿಷ್ ನಲ್ಲಿ ಎಂ ಎ ಪದವಿಯನ್ನು ಪಡೆದು ಎರಡು ವರ್ಷ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿರುತ್ತಾರೆ. ಸಾಮಾಜಿಕ ಜಾಲತಾಣ ಫೇಸ್ಬುಕ್ ನ ಅನೇಕ ಸಾಹಿತ್ಯ ಗುಂಪುಗಳಲ್ಲಿ  ದಿನಪತ್ರಿಕೆಗಳಲ್ಲಿ ಲೇಖನ  ಬರೆಯುತ್ತಿದ್ದಾರೆ. ಹಾಡು ಕೇಳುವುದು ದೇವರ ನಾಮವನ್ನು ಹಾಡುವುದು, ಪುಸ್ತಕಗಳನ್ನು ಓದುವುದು ಆಶ್ರಿತಾ ಅವರ ಹವ್ಯಾಸಗಳು. ‘ಕಥಾಪಂಜರʼ ಎಂಬ ಕಥಾ ಸಂಕಲನದ ಮೂಲಕ ಸಾಹಿತ್ಯ ಲೋಕಕ್ಕೆ ಕಾಲಿಡುತ್ತಿದ್ದಾರೆ.

ಆಶ್ರಿತಾ ಕಿರಣ್