ಲೀಲಾದೇವಿಗೆ ‘ಬಸವಶ್ರೀ’, ಅಂಬಯ್ಯಗೆ ‘ವಚನ ಸಾಹಿತ್ಯ ಶ್ರೀ’ ಪ್ರಶಸ್ತಿ

Date: 09-05-2024

Location: ಬೆಂಗಳೂರು


ಬೆಂಗಳೂರು: ಬಸವ ವೇದಿಕೆ ವತಿಯಿಂದ ನೀಡಲಾಗುವ 'ಬಸವಶ್ರೀ ಪ್ರಶಸ್ತಿ’ ಮತ್ತು ‘ವಚನ ಸಾಹಿತ್ಯ ಶ್ರೀ’ ಪ್ರಶಸ್ತಿಗೆ ಲೀಲಾದೇವಿ ಆರ್. ಪ್ರಸಾದ್ ಹಾಗೂ ಹಿಂದೂಸ್ತಾನಿ ಗಾಯಕ ಅಂಬಯ್ಯ ನುಲಿ ಆಯ್ಕೆಯಾಗಿದ್ದಾರೆ.

2024 ಮೇ 08ರಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೇದಿಕೆಯ ಅಧ್ಯಕ್ಷ ಸಿ. ಸೋಮಶೇಖರ್, 'ಲೀಲಾದೇವಿ ಆರ್. ಪ್ರಸಾದ್ ಅವರು ಸಾರ್ವಜನಿಕ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆ ಹಾಗೂ ಶರಣ ಸಾಹಿತ್ಯಕ್ಕೆ ನೀಡಿರುವ ಮೌಲಿಕದ ಕೊಡುಗೆಯನ್ನು ಪರಿಗಣಿಸಿ 'ಬಸವಶ್ರೀ ಪ್ರಶಸ್ತಿ'ಗೆ ಆಯ್ಕೆ ಮಾಡಲಾಗಿದೆ. ಅಂಬಯ್ಯ ನುಲಿ ಅವರು ವಚನ ಸಂಗೀತಕ್ಕೆ ಸಲ್ಲಿಸಿರುವ ಕೊಡುಗೆಯನ್ನು ಪರಿಗಣಿಸಿ 'ವಚನ ಸಾಹಿತ್ಯಶ್ರೀ ಪ್ರಶಸ್ತಿ'ಗೆ ಆಯ್ಕೆ ಮಾಡಲಾಗಿದೆ' ಎಂದು ಹೇಳಿದರು.

ಬೆಂಗಳೂರಿನ ಗಾಂಧಿಭವನದಲ್ಲಿ ಇದೇ ಮೇ 12ರಂದು ಸಂಜೆ 5.30ಕ್ಕೆ ನಡೆಯಲಿರುವ ಬಸವ ಜಯಂತಿ ಕಾರ್ಯಕ್ರಮದಲ್ಲಿ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುವುದು. ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ರಾದ ನಿರ್ಮಲಾನಂದನಾಥ ಸ್ವಾಮೀಜಿ ಅವರು ಕಾರ್ಯಕ್ರಮದ ಸಾನ್ನಿಧ್ಯ ವಹಿಸಲಿದ್ದು, ಶಾಸಕ ಬಸವರಾಜಿ ಬೊಮ್ಮಾಯಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ, ನಂತರ 'ಬಸವಶ್ರೀ' ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

ಇಸ್ರೋ ಮಾಜಿ ಅಧ್ಯಕ್ಷ ಎ.ಎಸ್. ಕಿರಣ್ ಕುಮಾರ್ ಅವರು 'ಬಸವಜ್ಯೋತಿ' ಸಂಚಿಕೆ ಹಾಗೂ 'ವಚನ ಸಾಹಿತ್ಯಶ್ರೀ' ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ರತ್ನಕಲಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ' ಎಂದರು.

MORE NEWS

2024ನೇ ಸಾಲಿನ ವಿಭಾ ಸಾಹಿತ್ಯ ಪ್ರಶಸ್ತಿಗೆ ಕಾವ್ಯ ಹಸ್ತಪ್ರತಿ ಆಹ್ವಾನ

30-05-2024 ಬೆಂಗಳೂರು

2024ನೇ ಸಾಲಿನ 'ವಿಭಾ ಸಾಹಿತ್ಯ ಪ್ರಶಸ್ತಿ’ಯನ್ನು ಕನ್ನಡ ಕವಯಿತ್ರಿ ವಿಭಾ ಅವರ ನೆನಪಿನಲ್ಲಿ ಕನ್ನಡದ ಕವಿ/ಕವ...

ಸರಳ ಮತ್ತು ಮೌಲ್ಯಾಧಾರಿತ ರಚನೆಗಳೇ ಸಾಹಿತ್ಯದ ಸತ್ವ; ಜಿ.ವಿ ಅರುಣ

30-05-2024 ಬೆಂಗಳೂರು

ಬೆಂಗಳೂರು: ಲೇಖಕ ಸತ್ಯಮೂರ್ತಿ ರಾವ್ (ಕಶ್ಯಪಸುತ)ಅವರ "ನುಡಿಗೆಜ್ಜೆ" ಚೊಚ್ಚಲ ಕವನ ಸಂಕಲನದ ಲೋಕಾರ್ಪಣೆ ಕಾರ...

ಪ್ರೊ.ಎಚ್.ಟಿ.ಪೋತೆ ಸೇರಿದಂತೆ ನಾಲ್ವರಿಗೆ 2023ನೇ ಸಾಲಿನ ‘ಶಿವರಾಮ ಕಾರಂತ ಪುರಸ್ಕಾರ’

29-05-2024 ಬೆಂಗಳೂರು

ಬೆಂಗಳೂರು: ಶಿವರಾಮ ಕಾರಂತ ಪ್ರತಿಷ್ಠಾನವು ನೀಡುವ 2023ನೇ ಸಾಲಿನ ‘ಶಿವರಾಮ ಕಾರಂತ ಪುರಸ್ಕಾರ’ ಪಟ್ಟಿಯು ಪ...