Date: 05-05-2024
Location: ಬೆಂಗಳೂರು
ಕನ್ನಡದ ಹೆಸರಾಂತ ಲೇಖಕ, ಕತೆಗಾರ, ಅನುವಾದಕ ಬುಳಸಾಗರ ಪಾಂಡುರಂಗಯ್ಯ ಅವರು 2024 ಮೇ 04ರಂದು ದಾವಣಗೆರೆಯಲ್ಲಿ ನಿಧನರಾಗಿದ್ದಾರೆ. ಸಾಹಿತ್ಯದ ಹಲವು ಪ್ರಕಾರಗಳಲ್ಲಿ ಕೃತಿ ರಚಿಸಿದ್ದರೂ ಎಲೆಮರೆ ಕಾಯಿಯಂತಿದ್ದ ಪಾಂಡುರಂಗಯ್ಯ ಅವರು ಕರ್ನಾಟಕ ವಿದ್ಯುಚ್ಛಕ್ತಿ ಮಂಡಳಿಯ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸಿ ನಿವೃತ್ತರಾಗಿದ್ದರು.
ಮಣಿಮೇಖಲೆ (2016 ಮುನ್ನುಡಿ ಡಾ.ಪ್ರಹ್ಲಾದ ಅಗಸನಕಟ್ಟೆ), ಶಂಬೂಕವಧೆ (2018 ಮುನ್ನುಡಿ- ಡಾ. ಲೋಕೇಶ್ ಅಗಸನಕಟ್ಟೆ) ಎಂಬ ಕಥಾಸಂಕಲನಗಳು ಮತ್ತು 'ಗಿಣಿರಾಮ ತಂದ ಮಂತ್ರದ ಮಾವಿನಹಣ್ಣು' ಎಂಬ ಮಕ್ಕಳ ಕಥಾ ಸಂಕಲನವನ್ನು ಪ್ರಕಟಿಸಿದ್ದರು.
ಪ್ರಚಾರ, ಪ್ರಸಿದ್ಧಿಗಳಿಂದ ದೂರವಿದ್ದು, ಪುಸ್ತಕ ಪ್ರಕಟಣೆಗೂ ತಲೆಕೆಡಿಸಿಕೊಳ್ಳದ ಪಾಂಡುರಂಗಯ್ಯನವರು ಅಪರೂಪದ ಕಥೆಗಾರರು. ಕಥೆ, ಕವನ, ಮಕ್ಕಳ ಸಾಹಿತ್ಯ, ವೈಚಾರಿಕ ಲೇಖನ, ಅನುವಾದ ಹೀಗೆ ಕಳೆದ ನಾಲ್ಕೈದು ದಶಕಗಳಿಂದ ಅವರು ನಿರಂತರವಾಗಿ ಪ್ರಜಾಮತ, ಪ್ರಜಾವಾಣಿ, ಸುಧಾ, ತರಂಗ, ಮಯೂರ, ತರಳಬಾಳು, ಸಿದ್ಧಗಂಗಾ ಮುಂತಾದ ನಿಯತಕಾಲಿಕಗಳಲ್ಲಿ ಬರೆದರು. ಸಾವಿರಾರು ಪುಟಗಳಷ್ಟಾಗುವ ಅವರ ಬರಹಗಳನ್ನೆಲ್ಲ ಪ್ರಕಟಿಸಿದ್ದರೆ ಹತ್ತಾರು ಪುಸ್ತಕಗಳಾಗುತ್ತಿದ್ದವು.
ದಾವಣಗೆರೆ ನಗರದಲ್ಲಿ ಎರಡು ದಶಕಗಳಿಂದ ವಾಸವಾಗಿದ್ದ ಅವರು ತಮ್ಮ 84ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ.
ಬೆಂಗಳೂರು: ವೈದೇಹಿ ಅಭಿಮಾನಿಗಳ ಬಳಗದಿಂದ ವೈದೇಹಿ ಸಾಹಿತ್ಯ ಮೂರು ಪುಸ್ತಕಗಳ ಚಿಂತನ ಮಂಥನ ಕಾರ್ಯಕ್ರಮವು 2024 ಜೂನ್ 02 ...
ಬೆಂಗಳೂರು: ಉತ್ಪಾದನೆ, ಸರಕು, ಬಂಡಾವಳ ಎಂದರೇನು ಎಂಬುದರ ಬಗ್ಗೆ ಮಾರ್ಕ್ಸ್ ಮುಖಾಂತರ ತಿಳಿದುಕೊಳ್ಳುವ ಪ್ರಯತ್ನ ಆಗಬೇಕು ...
ಹಿರಿಯ ಸಾಹಿತಿ, ಶಿಕ್ಷಣ ತಜ್ಞ, ಜಾನಪದ ವಿದ್ವಾಂಸರಾದ ಎಂ.ಜಿ. ಈಶ್ವರಪ್ಪ(74) ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ...
©2024 Book Brahma Private Limited.