ಪ್ರತಿಭೆ ಪರಿಶ್ರಮ ಮತ್ತು ಪರಿಣತಿ

Author : ವೈ.ಜಿ.ಮುರಳೀಧರನ್

Pages 208

₹ 250.00




Year of Publication: 2023
Published by: ಅಭಿನವ
Address: ಅಭಿನವ 17\ 18-2, ಮೊದಲನೆಯ ಮುಖ್ಯರಸ್ತೆ, ಮಾರೇನಹಳ್ಳಿ ವಿಜಯನಗರ, ಬೆಂಗಳೂರು- 560 040
Phone: 9448804905

Synopsys

‘ಪ್ರತಿಭೆ ಪರಿಶ್ರಮ ಮತ್ತು ಪರಿಣತಿ’ ಹತ್ತು ಐಎಎಸ್ ಅಧಿಕಾರಿಗಳ ಜೀವನ ಕಥನವಾಗಿದೆ. ಈ ಕೃತಿಯನ್ನು ವೈ.ಜಿ.ಮುರಳೀಧರನ್ ಅವರು ಸಂಪಾದಿಸಿದ್ದಾರೆ. ಇದಕ್ಕೆ ನರಹಳ್ಳಿ ಬಾಲಸುಬ್ರಹ್ಮಣ್ಯ ಅವರ ಬೆನ್ನುಡಿ ಬರಹವಿದ್ದು, ಆಡಳಿತದಲ್ಲಿ ಎದುರಾಗುವ ಮುಖ್ಯ ಸವಾಲೆಂದರೆ ಭ್ರಷ್ಟ ರಾಜಕಾರಣಿಗಳ ಹಸ್ತಕ್ಷೇಪ; ರಾಜಕಾರಣಿಗಳೆಲ್ಲ ಕೆಟ್ಟವರಲ್ಲ, ಆದರೆ ಎಂತಹ ವಾತಾವರಣವನ್ನೂ ಕೆಡಿಸುವ ಶಕ್ತಿ ಭ್ರಷ್ಟರಿಗಿದೆ. ತಮಗೆ ಅನುಕೂಲ 'ವ್ಯವಸ್ಥೆ'ಯನ್ನು ಕಲ್ಪಿಸಿಕೊಳ್ಳಲು ಇವರು ಅಧಿಕಾರಿಗಳನ್ನು ಬಳಸಿಕೊಳ್ಳುತ್ತಾರೆ. ಸಹಕರಿಸದವರನ್ನು 'ವರ್ಗಾವಣೆ'ಯ 'ಶಿಕ್ಷೆ'ಗೆ ಗುರಿಪಡಿಸುತ್ತಾರೆ. ಅವರ ಕ್ರಿಯಾಶಕ್ತಿಯೇ ಸತ್ವಹೀನವಾಗುವ ಸನ್ನಿವೇಶ ಸೃಷ್ಟಿಸುತ್ತಾರೆ. ಇವೆಲ್ಲ ನಿರೀಕ್ಷಿತ. ಕೆಲವೊಮ್ಮೆ ಇದಕ್ಕೆ ವ್ಯತಿರಿಕ್ತವಾದ ರೀತಿಯ ಪ್ರಕ್ರಿಯೆಯೂ ಜರುಗಬಹುದು. ಅಧಿಕಾರಿಯ ಪ್ರಭಾವೀ ವ್ಯಕ್ತಿತ್ವ ರಾಜಕಾರಣಿಯ ಸ್ಥಾನಕ್ಕೇ ಚ್ಯುತಿತರಬಹುದು. ಪ್ರತಿಕೂಲ ಪರಿಸ್ಥಿತಿಯನ್ನೆಲ್ಲ ಸಮರ್ಥವಾಗಿ ಎದುರಿಸಿ ಸಾರ್ಥಕ ಸೇವೆ ಸಲ್ಲಿಸಿದ ಹಲವಾರು ಶ್ರೇಷ್ಠರು ನಮ್ಮಲ್ಲಿದ್ದಾರೆ. ಅಂಥವರೇ ನಮಗೆ ಮಾದರಿ. ಅಂತಹ ಹತ್ತು ಜನರ ಪರಿಚಯ ಇಲ್ಲಿದೆ ಎಂದಿದ್ದಾರೆ. 

About the Author

ವೈ.ಜಿ.ಮುರಳೀಧರನ್
(16 August 1956)

ವೈ.ಜಿ.ಮುರಳೀಧರನ್ ಅವರು [1956] ಬಿ ಕಾಂ ಪದವೀಧರರು ಮತ್ತು ಪತ್ರಿಕೋದ್ಯಮದಲ್ಲಿ ಪಿಜಿ ಡಿಪ್ಲೋಮ ಪಡೆದಿದ್ದಾರೆ. ಬಿ ಎಚ್ ಇ ಎಲ್ ಕಾರ್ಖಾನೆಯಲ್ಲಿ 20 ವರ್ಷ ಹಣಕಾಸು ವಿಭಾಗದಲ್ಲಿ ಕಾರ್ಯ ನಿರ್ವಹಿಸಿ ಸ್ವಯಂ ನಿವೃತ್ತಿ ಪಡೆದು ನಂತರ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗದಲ್ಲಿ 12 ವರ್ಷ ಗ್ರಾಹಕ ವ್ಯವಹಾರಗಳ ಕಚೇರಿಯ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ್ದಾರೆ. 1993ರಿಂದ ಗ್ರಾಹಕ ಹಕ್ಕುಗಳು, ಮಾಹಿತಿ ಹಕ್ಕು ಇತ್ಯಾದಿ ಸಾಮಾಜಿಕ ವಿಷಯಗಳಲ್ಲಿ ತೊಡಗಿಸಿಕೊಂಡಿದ್ದಾರೆ ಕೇಂದ್ರ ಸರಕಾರದ ವಿವಿಧ ಸಲಹಾ ಮಂಡಳಿಯ ಸದಸ್ಯರಾಗಿ ನಾಗರಿಕರನ್ನು ಪ್ರತಿನಿಧಿಸಿದ್ದಾರೆ. ರಾಜ್ಯ ಸರಕಾರದ ಆಡಳಿತ ತರಬೇತಿ ಸಂಸ್ಥೆ, ನ್ಯಾಷನಲ್ ಲಾ ಸ್ಕೂಲ್ ...

READ MORE

Related Books